Previous Next

ಸರ್ವ ಸದಸ್ಯರ ಸಭೆ

ಗೌರವಾನ್ವಿತ ಸದಸ್ಯರೇ,,
ದಿನಾಂಕ 19.07.2026ನೇ ಭಾನುವಾರ ಮಧ್ಯಾಹ್ನ 03.00 ಗಂಟೆಗೆ ನಮ್ಮ ಅಂಗಸಂಸ್ಥೆಯ 27ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆಯು ಶ್ರೀ ಗುರುನರಸಿಂಹ ಕಲ್ಯಾಣ ಮಂದಿರ, ನಂ. 12, ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು–560 004ರಲ್ಲಿ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ. ಕೇಶವ ಹೊಳ್ಳರವರ ಅಧ್ಯಕ್ಷತೆಯಲ್ಲಿ ಕೇಂದ್ರದ ಅಧ್ಯಕ್ಷರಾದ ಹೆಚ್. ಸತೀಶ್ ಹಂದೆಯವರ ಉಪಸ್ಥಿತಿಯಲ್ಲಿ ನಡೆಯಲಿರುವುದು. ಆತ್ಮೀಯರಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿ ವಿನಂತಿ.
----- ಕಾರ್ಯಕಾರಿ ಮಂಡಳಿಯ ಪರವಾಗಿ, ಬಿ. ಚಂದ್ರಶೇಖರ ಐತಾಳ್, ಕಾರ್ಯದರ್ಶಿ.

ದುರ್ಗಾ ನಮಸ್ಕಾರ ಪೂಜೆ

ಆತ್ಮೀಯರೇ,
ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಉತ್ತರಹಳ್ಳಿ ಅಂಗಸಂಸ್ಥೆಯ ಆಶ್ರಯದಲ್ಲಿ ದಿನಾಂಕ 19.07.2026ರ ಭಾನುವಾರ ಸಂಜೆ 4.30 ಗಂಟೆಯಿಂದ ಕೂಟಬಂಧುಗಳ ಶ್ರೇಯೋಭಿವೃದ್ಧಿಗಾಗಿ ವೇ| ಬ್ರ| ಶ್ರೀ ಡಾ|| ಎಂ.ವಸಂತ ಭಟ್ ರವರ ನೇತೃತ್ವದಲ್ಲಿ ಶ್ರೀ ದುರ್ಗಾ ನಮಸ್ಕಾರ ಪೂಜೆಯನ್ನು ಶ್ರೀ ಗುರುನರಸಿಂಹ ಕಲ್ಯಾಣ ಮಂದಿರ, ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು,ಇಲ್ಲಿ ಏರ್ಪಡಿಸಲಾಗಿದೆ.ಆಗಮಿಸಿದ ಎಲ್ಲಾ ಕೂಟ ಬಂಧುಗಳಿಗೆ ಸಂಕಲ್ಪವನ್ನು ಮಾಡಿಸಲಾಗುವುದು.
----- ಅಧ್ಯಕ್ಷರು, ಕೋಟ ಮಹಾಜಗತ್ತು, ಸಾಲಿಗ್ರಾಮ (ರಿ.) ಉತ್ತರಹಳ್ಳಿ ಅಂಗಸಂಸ್ಥೆ

ಸಮಾರಂಭಗಳು

ನರಸಿಂಹ ಜಯಂತಿ

ಅಂಗಸಂಸ್ಥೆಯು ಗುರುನರಸಿಂಹ ಜಯಂತಿಯನ್ನು ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸುತ್ತೇವೆ.

ಕ್ರೀಡಾ ಮಿಲನ

ಕ್ರೀಡಾ ಮಿಲನವು ಸ್ನೇಹ, ಸ್ಪರ್ಧಾತ್ಮಕತೆ ಮತ್ತು ಒಗ್ಗಟ್ಟಿನ ಮನೋಭಾವವನ್ನು ಬೆಳೆಸುವ ಸಡಗರದ ವೇದಿಕೆ.

ಸರ್ವ ಸದಸ್ಯರ ಸಭೆ

ಸರ್ವ ಸದಸ್ಯರ ಸಭೆಯು ಸಂಘಟನೆಯ ಎಲ್ಲಾ ಸದಸ್ಯರನ್ನು ಒಗ್ಗೂಡಿಸಿ ಚರ್ಚೆ, ನಿರ್ಣಯ ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸುವ ಪ್ರಮುಖ ವೇದಿಕೆ.

ದುರ್ಗಾ ನಮಸ್ಕಾರ ಪೂಜೆ

ದುರ್ಗಾ ನಮಸ್ಕಾರ ಪೂಜೆಯು ದೇವಿ ದುರ್ಗೆಯ ಆಶೀರ್ವಾದವನ್ನು ಪಡೆಯಲು ಭಕ್ತಿ, ಶ್ರದ್ಧೆ ಮತ್ತು ಸಮರ್ಪಣೆಯಿಂದ ನೆರವೇರಿಸುವ ಪವಿತ್ರ ಆಚರಣೆ.

ವಾರ್ಷಿಕೋತ್ಸವ

ಪ್ರತಿಭಾಪುರಸ್ಕಾರವು ಸಾಧನೆಗೈದ ವ್ಯಕ್ತಿಗಳನ್ನು ಗೌರವಿಸಿ, ಅವರ ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸುವುದರ ಜೊತೆಗೆ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಒಳಗೊಂಡಿರುವ ಗೌರವಾನ್ವಿತ ಕಾರ್ಯಕ್ರಮ.

ದಿನದರ್ಶಿಕೆ

ಹಿಂದೂ ಕ್ಯಾಲೆಂಡರ್‌ವು ತಿಥಿ, ನಕ್ಷತ್ರ, ಯೋಗ, ಕರಣ ಹಾಗೂ ಹಬ್ಬ-ಉತ್ಸವಗಳ ಮಾಹಿತಿಯನ್ನು ನೀಡುವ ಪಾರಂಪರಿಕ ಕಾಲಗಣನೆಯ ದಿನದರ್ಶಿಕೆಯನ್ನು , ಅಂಗಸಂಸ್ಥೆಯಿಂದ ಪ್ರತಿವರ್ಷ ಪ್ರಕಟಿಸಲಾಗುತ್ತದೆ.

ನಿರ್ವಹಣಾ ತಂಡ

ಕೇಶವ ಹೊಳ್ಳ ಕೆ.

ಅಧ್ಯಕ್ಷರು

ಶ್ರೀಮತಿ ವಿಜಯಲಕ್ಷ್ಮಿ ಹೊಳ್ಳ

ಉಪಾಧ್ಯಕ್ಷರು

ಸುಬ್ಬರಾವ್ ಎಂ.

ಉಪಾಅಧ್ಯಕ್ಷರು

ಚಂದ್ರಶೇಖರ ಐತಾಳ ಬಿ.

ಕಾರ್ಯದರ್ಶಿ

ನಿಮ್ಮಿಂದ ಕೇಳಲು ಇಷ್ಟಪಡುತ್ತೇನೆ

ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆಗಳು ಮತ್ತು ದೂರುಗಳನ್ನು ಈ ಫಾರಂ ನಲ್ಲಿ ಭರ್ತಿ ಮಾಡಿ.

"ಶ್ರೀ ಯೋಗಾನಂದ ", ಗೋವಿಂದರಾಜ ಸ್ವಾಮಿ ದೇವಸ್ಥಾನದ ಎದುರು,
ಬೆಂಗಳೂರು - ೫೬೦ ೦೪೦